Slide
Slide
Slide
previous arrow
next arrow

ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ : ಪ್ರಕರಣ ದಾಖಲು

300x250 AD

ದಾಂಡೇಲಿ : ಮನೆಯಲ್ಲಿ ಒಬ್ಬನೇ ಇರುವುದನ್ನು ಕಂಡು ಸ್ಥಳೀಯ ಜನರ ತಂಡವೊಂದು ಮನೆಯ ಒಳಗಡೆ ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ, ಆನಂತರ ಯುವಕನ ತಂದೆ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ಕುರಿತಂತೆ ಶನಿವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಈರಪ್ಪ ಶಿನ್ನೂರು, ತಾಯಿ ಮಹದೇವಿ ಸಂಗಪ್ಪ ಶಿನ್ನೂರು ಎಂಬವರೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡವರು. ಶುಕ್ರವಾರ ರಾತ್ರಿ ಗಾಂಧಿನಗರದ ಮನೆಯಲ್ಲಿ ಮಾರುತಿ ಶಿನ್ನೂರು ಒಬ್ಬನೇ ಇದ್ದ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್ ಸೇರಿದಂತೆ ಮೂರ್ನಾಲ್ಕು ಜನರ ತಂಡವೊಂದು ಏಕಾಏಕಿ ಮಾರುತಿ ಶಿನ್ನೂರು ಈತನ ಮೇಲೆ ಹಲ್ಲೆ ನಡೆಸಿದೆ. ಮನೆಯಿಂದ ಎಳೆತಂದು ಹತ್ತಿರದಲ್ಲಿರುವ ಮೈದಾನದಲ್ಲಿ ಮತ್ತೆ ಈ ತಂಡ ಹೊಡೆದಿದೆ. ಅಷ್ಟೊತ್ತಿಗಾಗುವಾಗಲೇ ಹೊರಗಡೆ ಹೋಗಿ ಮರಳಿ‌ ಮನೆಗೆ ಬರುತ್ತಿರುವಾಗ ಮಾರುತಿ ಶಿನ್ನೂರು ಈತನ ತಂದೆ ಮತ್ತು ತಾಯಿ ಈತನನ್ನು ತಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದು ಮನೆಯ ಒಳಗಡೆ ಕಳುಹಿಸಿ ಬಾಗಿಲು ಮುಚ್ಚಿ ಚಿಲಕ ಹಾಕಿದ್ದಾರೆ. ಆದರೆ ಸಂತೋಷ್ ಮತ್ತೆ ಚಂದ್ರನ್ ಅವರ ತಂಡ ಬಾಗಿಲ ಚಿಲಕ ತೆಗೆದು ಮತ್ತೆ ಮಾರುತಿ ಶಿನ್ನೂರು ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಸಂಗಪ್ಪ ಈರಪ್ಪ ಶಿನ್ನೂರು ಮತ್ತು ಮಹಾದೇವಿ ಸಂಗಪ್ಪ ಶಿನ್ನೂರು ಇವರ ಮೇಲೆ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಮೂವರಿಗೂ ತಲೆಗೆ ಹಾಗೂ ದೇಹದ ಇನ್ನಿತರ ಭಾಗಗಳಿಗೆ ಗಾಯವಾಗಿದೆ.

300x250 AD

ಈ ಘಟನೆಯ ದೃಶ್ಯಾವಳಿ, ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಮಾರುತಿ ಶಿನ್ನೂರು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Share This
300x250 AD
300x250 AD
300x250 AD
Back to top